‘ಚೆರ್ರಿ’ ಸತತ ಚಿತ್ರೀಕರಣ
Posted date: 02 Tue, Jun 2015 – 08:46:47 AM

ಮೈಲಾರಿ ಎಂಟರ್‌ಪ್ರೈಸಸ್ ಅಡಿಯಲ್ಲಿ ಮಂಜುನಾಥ್ ಬಾಬು ಹಾಗೂ ಜೋಡಿದಾರ್ ಹರೀಶ್ ಅವರು ನಿರ್ಮಿಸುತ್ತಿರುವ ಜಯರಾಂ ಭದ್ರಾವತಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಚೆರ್ರಿ’ ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ೩೬ ದಿವಸಗಳ ಕಾಲ ಚಿತ್ರೀಕರಣ ಪೂರೈಸಿದ್ದು. ರಂಗಾಯಣ ರಘು, ಸಾಧು ಕೋಕಿಲ ಅವರ ಒಂದು ದಿನದ ಚಿತ್ರೀಕರಣ ನಡೆದರೆ, ‘ಚೆರ್ರಿ’ ಹಾಡುಗಳ ಚಿತ್ರೀಕರಣಕ್ಕೆ ಸಿದ್ದ.

ಸುಮಂತ್ ಹಾಗೂ ರಕ್ಷ ಅವರ ‘ಚೆರ್ರಿ’ ಸಿನಿಮಾದ ನಾಯಕ ಸುಮಂತ್ ಒಬ್ಬ ಬೈಕ್ ರೇಸರ್. ಮಲಯಾಳಂ ಮೂಲದ ರಕ್ಷ ಚಿತ್ರದ ಕಥಾ ನಾಯಕಿ. ‘ಚೆರ್ರಿ’ ಪ್ರೀತಿ, ಸಂಬಂಧ, ಭಾವನೆಗಳ ಸಮ್ಮಿಶ್ರಣ.

ಐದು ಹಾಡುಗಳನ್ನು ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಸಿದ್ದ ಪಡಿಸಿಕೊಂಡು ಚಿತ್ರೀಕರಣ ಮಾಡಲು ಯೋಜನೆ ಹಮ್ಮಿಕೊಂಡಿದೆ. ರವಿಶಂಕರ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬುಲ್ಲೆಟ್ ಪ್ರಕಾಶ್, ಸಂಗೀತ, ಸುಧಾಕರ್ ಹಾಗೂ ಇನ್ನಿತರರು ತಾರಣಗದಲ್ಲಿ ಇದ್ದಾರೆ.

ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಶ್ರೀ ನಿವಾಸ್ ಕಲಾ ನಿರ್ದೇಶನ, ಹರ್ಷ, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ಡಾಕ್ಟರ್ ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಕೆ ಕಲ್ಯಾಣ್, ಕವಿರಾಜ್ ಅವರು ಗೀತ ರಚನೆಕಾರರು. ರವಿ ವರ್ಮ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed